आराखड्यानुसारच रस्ता व गटर; आमदार हलगेकरांचे अधिकाऱ्यांना स्पष्ट निर्देश ; अधिकाऱ्यासह रस्त्याची पाहणी.
खानापूर : खानापूर तालुक्याचे आमदार विठ्ठल हलगेकर यांनी सार्वजनिक बांधकाम विभाग, बेळगाव डिव्हिजनचे एक्झिक्युटिव्ह इंजिनिअर (EE) श्री. एस. एस. सोबरद यांच्यासह खानापूर शेरा हद्दीअंतर्गत नव्याने बांधण्यात येत असलेल्या १४ कोटी रुपये खर्चाच्या सीसी रस्त्याची पाहणी केली.
या पाहणीवेळी भाजपा जिल्हा उपाध्यक्ष प्रमोद कोचेरी, सार्वजनिक बांधकाम विभाग, खानापूर उपविभागाचे असिस्टंट एक्झिक्युटिव्ह इंजिनिअर संजय गस्ते, भरमा, प्रकाश चव्हाण, मुरलीधर पाटील, पंडित ओगले, संजय कुबल, पत्रकार विवेक गिरी, दिनकर मरगाळे, राजेंद्र रायका, सुनील नायक, राजू जांबोटी तसेच खानापूर शहरातील सर्वपक्षीय सामाजिक कार्यकर्ते व नागरिक मोठ्या संख्येने उपस्थित होते.
खानापूर येथील राजा शिवछत्रपती चौकात बस वळविण्यास अडचण येत असल्याने सध्या बेळगावकडे जाणाऱ्या बसेस थेट नवीन बस डेपो मार्गे जात आहेत. त्यामुळे खानापूर शहर व ग्रामीण भागातील प्रवाशांना पायपीट करावी लागत असून अनेकांना रिक्षासाठी अतिरिक्त भाडे मोजावे लागत आहे. नागरिकांच्या या अडचणी लक्षात घेऊन आमदार विठ्ठल हलगेकर यांनी राजा शिवछत्रपती चौकाचा विस्तार व सुशोभीकरण करण्यास तसेच राजा शिवछत्रपती चौक ते जांबोटी कत्रीपर्यंत आराखड्यानुसार सात मीटर रुंदीचा रस्ता करण्यास प्राधान्य दिले असून यासाठी ठोस व सक्त पावले उचलली आहेत.
या अनुषंगाने आमदार हलगेकर यांनी सार्वजनिक बांधकाम विभाग, बेळगाव डिव्हिजनचे एक्झिक्युटिव्ह इंजिनिअर एस. एस. सोबरद आणि खानापूर डिव्हिजनचे असिस्टंट एक्झिक्युटिव्ह इंजिनिअर संजय गस्ती यांना प्रत्यक्ष रस्ता निर्माणस्थळी पाचारण केले होते. यावेळी राजा शिवछत्रपती चौकाची प्रत्यक्ष मोजणी करण्यात आली. तसेच सात मीटर रस्त्याच्या हद्दीत येणाऱ्या दुकान गाळ्यांचीही मोजणी करण्यात आली.
आराखड्यानुसार प्रथम सात मीटर रुंदीचा रस्ता व त्यानंतर गटर बांधकाम करण्याचा निर्णय यावेळी निश्चित करण्यात आला. यानंतर आमदार व अधिकाऱ्यांनी करंबळ कत्री ते रुमेवाडी कत्रीपर्यंतच्या रस्त्याचीही पाहणी केली. या मार्गावर असलेले काही अडथळे व आवश्यक ठिकाणी करावयाच्या बदलांबाबत संबंधित कंत्राटदाराला सूचना देण्यात आल्या.
यावेळी प्रमोद कोचेरी, मुरलीधर पाटील, प्रकाश चव्हाण, पंडित ओगले, संजय कुबल, राजेंद्र रायका, पत्रकार विवेक गिरी व दिनकर मरगाळे यांनी आराखड्यामध्ये (मॅपमध्ये) दर्शविल्याप्रमाणे सात मीटर रुंदीचा रस्ता, त्यानंतर मोरम व त्यानंतर गटर बांधकाम करण्याची मागणी आमदार विठ्ठल हलगेकर, एक्झिक्युटिव्ह इंजिनिअर एस. एस. सोबरद आणि असिस्टंट एक्झिक्युटिव्ह इंजिनिअर संजय गस्ती यांच्याकडे केली.
यावर आमदार विठ्ठल हलगेकर व संबंधित अधिकाऱ्यांनी आराखड्यानुसारच रस्ता व चौकाची रुंदी वाढविण्यात येईल, असे स्पष्ट आश्वासन दिले.
ಮಂಜೂರಾತಿ ಪ್ರಕಾರವೇ ರಸ್ತೆ ಮತ್ತು ಚರಂಡಿ; ಅಧಿಕಾರಿಗಳಿಗೆ ಶಾಸಕ ಹಾಲಗೇಕರ್ ಅವರ ಸ್ಪಷ್ಟ ಸೂಚನೆ – ಅಧಿಕಾರಿಗಳೊಂದಿಗೆ ರಸ್ತೆ ಪರಿಶೀಲನೆ ನಡೆಸಿದ ಶಾಸಕರು..
ಖಾನಾಪುರ : ಖಾನಾಪುರ ತಾಲ್ಲೂಕಿನ ಶಾಸಕ ವಿಠ್ಠಲ್ ಹಾಲಗೇಕರ್ ಅವರು ಸಾರ್ವಜನಿಕ ಕಾಮಗಾರಿಗಳ ಇಲಾಖೆ, ಬೆಳಗಾವಿ ಡಿವಿಷನ್ನ ಕಾರ್ಯನಿರ್ವಾಹಕ ಇಂಜಿನಿಯರ್ (EE) ಶ್ರೀ ಎಸ್.ಎಸ್. ಸೋಬರದ್ ಅವರೊಂದಿಗೆ ಖಾನಾಪುರ ನಗರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೂ. 14 ಕೋಟಿ ವೆಚ್ಚದ ಸಿಸಿ ರಸ್ತೆಯ ಪರಿಶೀಲನೆ ನಡೆಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೋಚೇರಿ, ಸಾರ್ವಜನಿಕ ಕಾಮಗಾರಿಗಳ ಇಲಾಖೆ ಖಾನಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಗಸ್ತೆ, ಭರಮ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಚವ್ಹಾಣ್, ಮುರಳೀಧರ ಪಾಟೀಲ್, ಪಂಡಿತ್ ಓಗಲೆ, ಸಂಜಯ್ ಕುಬಲ, ಪತ್ರಕರ್ತರಾದ ವಿವೇಕ್ ಗಿರಿ, ದಿನಕರ ಮರಗಾಳೆ, ರಾಜೇಂದ್ರ ರೈಕಾ, ಸುನಿಲ್ ನಾಯಕ್, ರಾಜು ಜಾಂಬೋಟಿ, ಹಾಗೆಯೇ ಖಾನಾಪುರ ನಗರದ ಸರ್ವಪಕ್ಷೀಯ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಖಾನಾಪುರದ ರಾಜಾ ಶಿವಛತ್ರಪತಿ ವೃತ್ತದಲ್ಲಿ ಬಸ್ ತಿರುಗಿಸಲು ಅಡಚಣೆ ಉಂಟಾಗುತ್ತಿರುವ ಕಾರಣ, ಪ್ರಸ್ತುತ ಬೆಳಗಾವಿಯ ಕಡೆಗೆ ಹೋಗುವ ಬಸ್ಸುಗಳು ನೇರವಾಗಿ ಹೊಸ ಬಸ್ ಡೆಪೋ ಮಾರ್ಗವಾಗಿ ಸಂಚರಿಸುತ್ತಿವೆ. ಇದರ ಪರಿಣಾಮವಾಗಿ ಖಾನಾಪುರ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ನಡೆಯುತ್ತಲೆ ಬರಬೇಕಾದ ಪರಿಸ್ಥಿತಿ ಉಂಟಾಗಿದ್ದು, ಹಲವರು ಆಟೋರಿಕ್ಷೆಗೆ ಹೆಚ್ಚುವರಿ ಬಾಡಿಗೆ ಪಾವತಿಸಬೇಕಾಗಿದೆ. ಈ ನಾಗರಿಕರ ಅಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಶಾಸಕ ವಿಠ್ಠಲ್ ಹಾಲಗೇಕರ್ ಅವರು ರಾಜಾ ಶಿವಛತ್ರಪತಿ ವೃತ್ತದ ವಿಸ್ತರಣೆ ಹಾಗೂ ಸೌಂದರ್ಯೀಕರಣಕ್ಕೆ, ಹಾಗೆಯೇ ರಾಜಾ ಶಿವಛತ್ರಪತಿ ವೃತ್ತದಿಂದ ಜಾಂಬೋಟಿ ಕತ್ರಿವರೆಗೆ ಮಂಜೂರಾತಿ ಪ್ರಕಾರ 7 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಇದಕ್ಕಾಗಿ ದೃಢ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ಸಂಬಂಧವಾಗಿ ಶಾಸಕ ಹಲಗೇಕರ್ ಅವರು ಸಾರ್ವಜನಿಕ ಕಾಮಗಾರಿಗಳ ಇಲಾಖೆ, ಬೆಳಗಾವಿ ಡಿವಿಷನ್ನ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್. ಸೋಬರದ್ ಹಾಗೂ ಖಾನಾಪುರ ಡಿವಿಷನ್ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಗಸ್ತಿ ಅವರನ್ನು ರಸ್ತೆ ನಿರ್ಮಾಣ ಸ್ಥಳಕ್ಕೆ ನೇರವಾಗಿ ಕರೆಸಿ ಪರಿಶೀಲನೆ ನಡೆಸಿಸಿದರು. ಈ ವೇಳೆ ರಾಜಾ ಶಿವಛತ್ರಪತಿ ವೃತ್ತದಲ್ಲಿ ನೆರೆದವರು ಸಮ್ಮುಖದಲ್ಲಿ ಮಾಪನ ಮಾಡಲಾಯಿತು. ಹಾಗೆಯೇ 7 ಮೀಟರ್ ರಸ್ತೆ ವ್ಯಾಪ್ತಿಗೆ ಬರುವ ಅಂಗಡಿಗಳ ಮಾಪನವೂ ನಡೆಸಲಾಯಿತು.
ಮಂಜೂರಾತಿ ಪ್ರಕಾರ ಮೊದಲು 7 ಮೀಟರ್ ಅಗಲದ ರಸ್ತೆ ನಿರ್ಮಿಸಿ, ನಂತರ ಚರಂಡಿ (ಗಟಾರ್) ನಿರ್ಮಾಣ ಮಾಡುವ ನಿರ್ಧಾರ ಈ ವೇಳೆ ಖಚಿತಪಡಿಸಲಾಯಿತು. ನಂತರ ಶಾಸಕ ಹಾಗೂ ಅಧಿಕಾರಿಗಳು ಕರಂಬಳ ಕತ್ರಿಯಿಂದ ರೂಮೇವಾಡಿ ಕತ್ರಿವರೆಗೆ ಇರುವ ರಸ್ತೆಯನ್ನೂ ಪರಿಶೀಲಿಸಿದರು. ಈ ಮಾರ್ಗದಲ್ಲಿರುವ ಕೆಲವು ಅಡಚಣೆಗಳು ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಮೋದ್ ಕೋಚೇರಿ, ಮುರಳೀಧರ ಪಾಟೀಲ್, ಪ್ರಕಾಶ್ ಚವ್ಹಾಣ್, ಪಂಡಿತ್ ಓಗಲೆ, ಸಂಜಯ್ ಕುಬಲ, ರಾಜೇಂದ್ರ ರೈಕಾ, ಪತ್ರಕರ್ತರಾದ ವಿವೇಕ್ ಗಿರಿ ಹಾಗೂ ದಿನಕರ ಮರಗಾಳೆ ಅವರು, ಮಂಜೂರಾತಿಯಲ್ಲಿ (ಮ್ಯಾಪ್ನಲ್ಲಿ) ತೋರಿಸಿರುವಂತೆ ಮೊದಲು 7 ಮೀಟರ್ ಅಗಲದ ರಸ್ತೆ, ನಂತರ ಮೊರಂ ಮತ್ತು ನಂತರ ಚರಂಡಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಶಾಸಕ ವಿಠ್ಠಲ್ ಹಾಲಗೇಕರ್, ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್. ಸೋಬರದ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಗಸ್ತಿ ಅವರ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯೆಯಾಗಿ ಶಾಸಕ ವಿಠ್ಠಲ್ ಹಾಲ್ಗೇಕರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮಂಜುರಾತಿ ಪ್ರಕಾರವೇ ರಸ್ತೆ ಹಾಗೂ ವೃತ್ತದ ಅಗಲವನ್ನು ವಿಸ್ತರಿಸಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು.


