दांडेली–अळणावर दरम्यान डेमू रेल्वे सेवा पुन्हा सुरू करण्यास नैऋत्य रेल्वेची मंजुरी : खासदारांकडून केंद्रीय मंत्र्यांचे मानले आभार
दांडेली आणि अळनावर दरम्यान अनेक दिवसांपासून स्थगित झालेली रेल्वे सेवा पुन्हा सुरू करण्याच्या दिशेने महत्त्वाची पावलं उचलण्यात आली असून, नैऋत्य रेल्वेने या मार्गावर डेमू (DEMU) रेल्वे सेवा सुरू करण्यास मंजुरी दिली आहे. त्यामुळे दांडेली व परिसरातील नागरिकांची दीर्घकाळ प्रलंबित असलेली मागणी अखेर पूर्ण झाली आहे.

कॅनरा लोकसभा मतदारसंघाचे माननीय खासदार श्री विश्वेश्वर हेगडे-कागेरी यांच्या सातत्यपूर्ण पाठपुरावा, प्रयत्न आणि प्रस्तावामुळेच हा महत्त्वपूर्ण निर्णय घेण्यात आला आहे.
या रेल्वे सेवा पुनरारंभाच्या प्रस्तावाला मान्यता दिल्याबद्दल खासदार श्री कागेरी यांनी केंद्र सरकार व रेल्वे मंत्रालयाचे आभार मानले आहेत.
केंद्र रेल्वेमंत्री श्री अश्विनी वैष्णव तसेच रेल्वे राज्य मंत्री श्री व्ही. सोमनन्ना यांचेही त्यांनी विशेष आभार व्यक्त केले असून, या निर्णयामुळे स्थानिक नागरिकांच्या प्रवास सुविधेत मोठी वाढ होणार असून या भागातील संपर्क व्यवस्था तसेच आर्थिक व्यवहारांना चालना मिळणार असल्याचे त्यांनी सांगितले.
डेमू सेवा सुरू झाल्यानंतर दांडेली तसेच परिसरातील हजारो प्रवासी, विद्यार्थी, व्यापारी व कामगारवर्गाला मोठा दिलासा मिळणार आहे. नैऋत्य रेल्वेकडून लवकरच या रेल्वे सेवेच्या प्रारंभाची दिनांक व वेळापत्रकाची घोषणा करण्यात येणार आहे.

ದಾಂಡೇಲಿ-ಅಳ್ನಾವರ ನಡುವೆ ಡಿಇಎಂಯು ರೈಲು ಸೇವೆ ಪುನರಾರಂಭಕ್ಕೆ ನೈರುತ್ಯ ರೈಲ್ವೆ ಅನುಮೋದನೆ: ಸಂಸದರಿಂದ ಕೇಂದ್ರ ಸಚಿವರಿಗೆ ಅಭಿನಂದನೆ.
ದಾಂಡೇಲಿ ಮತ್ತು ಅಳ್ನಾವರ ನಡುವೆ ಬಹುದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ನೈರುತ್ಯ ರೈಲ್ವೆಯು ಈ ಮಾರ್ಗದಲ್ಲಿ ಡಿಇಎಂಯು (DEMU) ರೈಲು ಸೇವೆಯನ್ನು ಆರಂಭಿಸಲು ಅನುಮೋದನೆ ನೀಡಿದೆ. ಈ ಮೂಲಕ ದಾಂಡೇಲಿ ಜನತೆಯ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಉತ್ತರ ಕನ್ನಡ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನ, ಪರಿಶ್ರಮ ಮತ್ತು ಪ್ರಸ್ತಾವನೆಯ ಫಲವಾಗಿ ನೈರುತ್ಯ ರೈಲ್ವೆ ಈ ನಿರ್ಧಾರ ಕೈಗೊಂಡಿದೆ.
ಈ ಮಹತ್ವದ ರೈಲು ಸೇವೆ ಪುನರಾರಂಭದ ಪ್ರಸ್ತಾವನೆಯನ್ನು ಪುರಸ್ಕರಿಸಿ, ಅನುಮೋದನೆ ನೀಡಿದ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯಕ್ಕೆ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ
ಇವರಿಗೆ ಸಂಸದರು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದು, ಸ್ಥಳೀಯ ಜನರಿಗೆ ಅನುಕೂಲವಾಗುವ ಈ ನಿರ್ಧಾರವು ಈ ಪ್ರದೇಶದ ಸಂಪರ್ಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಡಿಇಎಂಯು ರೈಲು ಸೇವೆ ಪ್ರಾರಂಭಿಸುವುದರಿಂದ ದಾಂಡೇಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನೈರುತ್ಯ ರೈಲ್ವೆಯು ಶೀಘ್ರದಲ್ಲಿಯೇ ಈ ಸೇವೆಯ ಪ್ರಾರಂಭದ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

