उद्या सुवर्णसौधला घेराव घालणार ; शेतकऱ्यांच्या समस्यांकडे लक्ष वेधण्यासाठी भव्य आंदोलन – भाजपा राज्याध्यक्ष विजयेंद्र यांची माहिती.
बेळगाव : राज्यातील ऊस, भात, मका आदी पिकांच्या प्रश्नांवर मुख्यमंत्री सिद्धरामय्या यांच्या नेतृत्वाखालील सरकार अपयशी ठरल्याचा आरोप करत भारतीय जनता पक्षाने उद्या मंगळवार, दि. 9 डिसेंबर रोजी बेळगाव येथील सुवर्ण विधानसौधला घेराव घालून भव्य आंदोलन करण्याची घोषणा केली आहे. ही माहिती भाजपचे राज्याध्यक्ष विजयेंद्र यांनी दिली.
राज्य सरकारच्या हिवाळी अधिवेशनाच्या पार्श्वभूमीवर भाजपचा हा मोठा मेळावा आयोजित करण्यात आला आहे. या आंदोलनाच्या पूर्वतयारीचा आढावा घेण्यासाठी बेळगाव येथे आलेल्या विजयेंद्र यांनी प्रसारमाध्यमांशी संवाद साधताना राज्य सरकारवर जोरदार टीका केली.

शेतकऱ्यांच्या समस्या सोडवण्यात सरकार अपयशी – विजयेंद्र..
विजयेंद्र म्हणाले की, राज्यातील ऊस, भात व इतर पिकं घेणाऱ्या शेतकऱ्यांना प्रचंड अडचणींना सामोरे जावे लागत आहे.
अलीकडील पुरपरिस्थितीत महसूल मंत्र्यांनी शेतकऱ्यांना नुकसानभरपाई देण्याचे आश्वासन दिले होते; मात्र आजवर प्रत्यक्ष मदत मिळालेली नाही.
भाजपने वारंवार राज्य सरकारला जाब विचारला असता सरकारकडून नेहमी केंद्र सरकारलाच दोष दिला जात असल्याचा आरोप त्यांनी केला.
हजारो शेतकरी व नेतेमंडळींच्या सहभागाची अपेक्षा…
या आंदोलनामध्ये बेळगावसह बागलकोट, विजापूर आदी जिल्ह्यांमधील हजारो शेतकरी सहभागी होणार आहेत. तसेच भाजपचे आमदार, खासदार, विधान परिषद सदस्य आणि मोठ्या संख्येने पक्षाचे कार्यकर्तेही उपस्थित राहणार असल्याचे विजयेंद्र यांनी सांगितले.
राज्य सरकार जबाबदारी झटकत आहे..
मुख्यमंत्री सिद्धरामय्या व उपमुख्यमंत्री डी. के. शिवकुमार शेतकऱ्यांच्या समस्या सोडवण्याऐवजी त्या संदर्भात केंद्र सरकारला पत्र लिहितात, असेही विजयेंद्र यांनी म्हटले.
“प्रत्येक मुद्द्यावर राज्य सरकार केंद्रावर दोषारोप करून आपली जबाबदारी झटकत आहे,” अशी टीका त्यांनी केली.
शेतकऱ्यांना योग्य नुकसानभरपाईची मागणी…
हिवाळी अधिवेशनाकडे शेतकरी मोठ्या अपेक्षेने पाहत असून त्यांना योग्य ती नुकसानभरपाई मिळावी, ही भाजपची ठाम मागणी असल्याचेही त्यांनी स्पष्ट केले.
या पत्रकार परिषदेत आमदार सी. टी. रवी, आमदार अभय पाटील, आमदार विठ्ठल हलगेकर, माजी आमदार अरविंद पाटील यांच्यासह विविध नेतेमंडळी उपस्थित होती.
ನಾಳೆ ಸುವರ್ಣಸೌಧಕ್ಕೆ ಘೇರಾವ್ ; ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಭವ್ಯ ಪ್ರತಿಭಟನೆ – ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮಾಹಿತಿ.
ಬೆಳಗಾವಿ : ರಾಜ್ಯದ ಕಬ್ಬು, ಭತ್ತ, ಜೋಳ ಇತ್ಯಾದಿ ಬೆಳೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗಮನ ಹರಿಸಲು ವಿಫಲವಾಗಿದೆ ಎಂಬ ಆರೋಪ ಮಾಡುತ್ತ ಭಾರತೀಯ ಜನತಾ ಪಕ್ಷವು ನಾಳೆ ಮಂಗಳವಾರ, ಡಿ. 9 ಡಿಸೆಂಬರ್ ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಘೇರಾವ್ ಹಾಕಿ ಭವ್ಯ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಈ ಮಾಹಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನೀಡಿದ್ದಾರೆ. ರಾಜ್ಯ ಸರ್ಕಾರದ ಶೀತಕಾಲೀನ ಅಧಿವೇಶನದ ಹಿನ್ನೆಲೆಯ ಬಿಜೆಪಿ ಈ ದೊಡ್ಡ ಮೇಳಾವನ್ನು ಪ್ರತಿಭಟನೆ ಆಯೋಜಿಸಿದೆ.
ಈ ಪ್ರತಿಭಟನೆಯ ಪೂರ್ವ ತಯಾರಿಯ ವಿಮರ್ಶೆಗಾಗಿ ಬೆಳಗಾವಿಗೆ ಆಗಮಿಸಿದ ವಿಜಯೇಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದರು.
ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದ– ವಿಜಯೇಂದ್ರ
ವಿಜಯೇಂದ್ರ ಅವರು – ರಾಜ್ಯದ ಕಬ್ಬು, ಭತ್ತ ಹಾಗೂ ಇತರ ಬೆಳೆಗಳನ್ನು ಬೆಳೆದ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ಪ್ರವಾಹ ಸಂದರ್ಭದಲ್ಲಿ ಕಂದಾಯ ಸಚಿವರು ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು; ಆದರೆ ಇಂದಿನವರೆಗೂ ಯಾವುದೇ ಸಹಾಯ ಲಭಿಸಿಲ್ಲ. ಬಿಜೆಪಿ ರಾಜ್ಯ ಸರ್ಕಾರವನ್ನು ಹಲವಾರು ಬಾರಿ ಪ್ರಶ್ನಿಸಿದರೂ ಸರ್ಕಾರ ಯಾವಾಗಲೂ ಕೇಂದ್ರ ಸರ್ಕಾರವನ್ನು ಹಣೆಗಾರರಾಗಿ ಮಾಡುತ್ತಿದ್ದೆ ಎಂದು ಅವರು ಆರೋಪಿಸಿದರು.
ಸಾವಿರಾರು ರೈತರು ಹಾಗೂ ನಾಯಕರ ಪಾಲ್ಗೊಳ್ಳುವ ನಿರೀಕ್ಷೆ
ಈ ಪ್ರತಿಭಟನೆಯಲ್ಲಿ ಬೆಳಗಾವಿಯ ಜೊತೆಗೆ ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವಾರು ಜಿಲ್ಲೆಗಳ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಬಿಜೆಪಿ ಶಾಸಕರು, ಸಂಸದರರು, ವಿಧಾನಪರಿಷತ್ ಸದಸ್ಯರು ಹಾಗೂ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಾಗಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಜವಾಬ್ದಾರಿ ತಪ್ಪಿಸುತ್ತಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ ಎಂದು ವಿಜಯೇಂದ್ರ ಅವರು ಟೀಕಿಸಿದರು. “ಪ್ರತಿ ವಿಷಯದಲ್ಲೂ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡಿ ತನ್ನ ಜವಾಬ್ದಾರಿಯನ್ನು ತಪ್ಪಿಸುತ್ತಿದೆ,” ಎಂದು ಅವರು ಹೇಳಿದರು.
ರೈತರಿಗೆ ಯೋಗ್ಯವಾದ ಪರಿಹಾರದ ಬೇಡಿಕೆ
ಶೀತಕಾಲೀನ ಅಧಿವೇಶನದತ್ತ ರೈತರು ದೊಡ್ಡ ನಿರೀಕ್ಷೆಯಿಂದ ನೋಡುತ್ತಿದ್ದಾರೆ ಮತ್ತು ಅವರಿಗೆ ಯೋಗ್ಯವಾದ ಪರಿಹಾರ ಸಿಗಬೇಕು ಎಂಬುದು ಬಿಜೆಪಿ ಪಕ್ಷದ ದೃಢವಾದ ಬೇಡಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿ.ಟಿ. ರವಿ, ಶಾಸಕ ಅಭಯ ಪಾಟೀಲ, ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

