खानापूरात “सायन्स ऑन व्हील” प्रदर्शनाचे आयोजन; स्वामी विवेकानंद स्कूलच्या विद्यार्थ्यांसह परिसरातील विद्यार्थ्यांचा उत्स्फूर्त प्रतिसाद.
खानापूर (ता. 9 नोव्हेंबर) : विज्ञान विषयाविषयी विद्यार्थ्यांमध्ये रस, जिज्ञासा व वैज्ञानिक दृष्टिकोन निर्माण करण्यासाठी गोवा सायन्स सेंटर आणि गुलबर्गा सायन्स सेंटर यांच्या संयुक्त विद्यमाने आयोजित “सायन्स ऑन व्हील” या अनोख्या विज्ञान प्रदर्शनाचा शुभारंभ शनिवार दिनांक 8 नोव्हेंबर रोजी स्वामी विवेकानंद स्कूल खानापूर या ठिकाणी झाला. या उपक्रमाच्या अंतर्गत प्रयोगशील आणि अनुभवाधारित शिक्षण विद्यार्थ्यांपर्यंत पोहोचविण्याचा प्रयत्न करण्यात येत आहे.
या विज्ञानप्रदर्शन बसचे उद्घाटन श्री स्वामी विवेकानंद स्कूलचे चेअरमन ॲड. चेतन मनेरीकर यांच्या हस्ते करण्यात आले. यावेळी शाळेच्या क्रीडांगणात बस उभी करण्यात आली होती. या मोबाइल विज्ञान प्रयोगशाळेत विविध वैज्ञानिक प्रयोग, मॉडेल्स, तंत्रज्ञानाच्या नवकल्पना तसेच पर्यावरण, अवकाश, भौतिकशास्त्र आणि रसायनशास्त्राशी संबंधित माहिती विद्यार्थ्यांना प्रात्यक्षिकांद्वारे दाखविण्यात आली.
उद्घाटनापूर्वी स्वामी विवेकानंद हायस्कूलच्या सभागृहात एक माहितीपर कार्यक्रम घेण्यात आला. या कार्यक्रमात “सायन्स ऑन व्हील” संकल्पना, तिचे उद्दिष्ट आणि विद्यार्थ्यांनी त्यातून घ्यावयाचा शैक्षणिक लाभ यावर सविस्तर मार्गदर्शन करण्यात आले.
यावेळी बोलताना ॲड. चेतन मनेरीकर म्हणाले, “सायन्स ऑन व्हील्स हा उपक्रम अत्यंत स्तुत्य असून, ग्रामीण भागातील विद्यार्थ्यांपर्यंत विज्ञान प्रयोगशाळा पोहोचविण्याचे हे एक अभिनव पाऊल आहे. विद्यार्थ्यांनी या संधीचा लाभ घेत स्वतःमध्ये वैज्ञानिक दृष्टिकोन विकसित करावा.” तसेच ही प्रदर्शन सोमवारी सुद्धा सुरू राहणार असल्याचे त्यांनी सांगितले.
कार्यक्रमास कॉलेजचे प्राचार्य प्रा. पी. के. चापगावकर, प्रो. शशिकांत पाटील, मुख्याध्यापक विनोद मराठे, संस्थेचे संचालक दिलीप शहापूरकर, सदानंद कपिलेश्वरी, तसेच गोवा सायन्स सेंटरचे भूषण राऊत, गुलबर्गा सायन्स सेंटरचे अंबराया बेलमगी व लक्ष्मीकांत जमादार उपस्थित होते.
शाळेचे शिक्षकवर्ग, विद्यार्थी आणि खानापूर परिसरातील अनेक शाळांमधील विद्यार्थ्यांनी उत्स्फूर्तपणे सहभाग घेतला. विविध विज्ञान प्रयोग प्रत्यक्ष अनुभवण्याची संधी विद्यार्थ्यांना मिळाल्याने सर्वत्र आनंदाचे वातावरण होते.
सदर प्रदर्शन बस 8 नोव्हेंबर (शनिवार) रोजी दिवसभर विद्यार्थ्यांसाठी खुली ठेवण्यात आली होती. 10 नोव्हेंबर (सोमवार) रोजी पुन्हा एकदा ती दिवसभर स्वामी विवेकानंद स्कूलच्या आवारात उपलब्ध राहणार आहे. परिसरातील सर्व शाळा व कॉलेजमधील विद्यार्थ्यांनी या प्रदर्शनाला भेट देऊन विज्ञानविषयक ज्ञानवृद्धी करावी, असे आवाहन संस्थेचे चेअरमन चेतन मनेरिकर व आयोजकांकडून करण्यात आले आहे.
ಖಾನಾಪುರದಲ್ಲಿ “ಸೈನ್ಸ್ ಆನ್ ವೀಲ್” ಪ್ರದರ್ಶನ; ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುತ್ತಮುತ್ತಲಿನ ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಪ್ರದರ್ಶನ.
ಖಾನಾಪುರ (ತಾ. 9 ನವೆಂಬರ್) : ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಆಸಕ್ತಿ, ಕುತೂಹಲ ಹಾಗೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಉದ್ದೇಶದಿಂದ ಗೋವಾ ಸೈನ್ಸ್ ಸೆಂಟರ್ ಮತ್ತು ಗುಲ್ಬರ್ಗಾ ಸೈನ್ಸ್ ಸೆಂಟರ್ ಇವರ ಸಂಯುಕ್ತ ಸಹಯೋಗದಿಂದ ಆಯೋಜಿಸಲಾದ “ಸೈನ್ಸ್ ಆನ್ ವೀಲ್” ಎಂಬ ವಿಶಿಷ್ಟ ವಿಜ್ಞಾನ ಪ್ರದರ್ಶನದ ಉದ್ಘಾಟನೆ ಶನಿವಾರ, ದಿನಾಂಕ 8 ನವೆಂಬರ ರಂದು ಸ್ವಾಮಿ ವಿವೇಕಾನಂದ ಶಾಲೆ, ಖಾನಾಪುರದಲ್ಲಿ ಜರುಗಿತು. ಈ ಉಪಕ್ರಮದ ಮೂಲಕ ಪ್ರಾಯೋಗಿಕ ಮತ್ತು ಅನುಭವಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳವರೆಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
ಈ ವಿಜ್ಞಾನ ಪ್ರದರ್ಶನ ಬಸ್ಸ ನ್ ಉದ್ಘಾಟನೆಯನ್ನು ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷ ಅಡ್ವ. ಚೇತನ ಮನೇರಿಕರ ಅವರ ಕೈಯಿಂದ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಕ್ರೀಡಾಂಗಣದಲ್ಲಿ ಬಸ್ ನಿಲ್ಲಿಸಲಾಗಿತ್ತು. ಈ ಮೊಬೈಲ್ ವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗಗಳು, ಮಾದರಿಗಳು, ತಂತ್ರಜ್ಞಾನ ಹೊಸ ಕಲ್ಪನೆಗಳು, ಪರಿಸರ, ಅಂತರಿಕ್ಷ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯಿಂದ ತೋರಿಸಲಾಯಿತು.
ಉದ್ಘಾಟನೆಯ ಮೊದಲು ಸ್ವಾಮಿ ವಿವೇಕಾನಂದ ಹೈಸ್ಕೂಲ್ ಸಭಾಂಗಣದಲ್ಲಿ ಮಾಹಿತಿ ಪರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ “ಸೈನ್ಸ್ ಆನ್ ವೀಲ್” ಪರಿಕಲ್ಪನೆ, ಅದರ ಉದ್ದೇಶ ಹಾಗೂ ವಿದ್ಯಾರ್ಥಿಗಳು ಅದರಿಂದ ಪಡೆಯಬೇಕಾದ ಶೈಕ್ಷಣಿಕ ಪ್ರಯೋಜನ ಕುರಿತು ಸವಿಸ್ತಾರ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಡ್ವ. ಚೇತನ ಮನೇರಿಕರ್ ಹೇಳಿದರು: “ಸೈನ್ಸ್ ಆನ್ ವೀಲ್” ಉಪಕ್ರಮ ಅತ್ಯಂತ ಶ್ಲಾಘನೀಯವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳವರೆಗೆ ವಿಜ್ಞಾನ ಪ್ರಯೋಗಾಲಯವನ್ನು ತಲುಪಿಸುವ ಅದ್ಭುತ ಹೆಜ್ಜೆಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮೊಳಗೆ ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳಬೇಕು,” ಎಂದು ಹೇಳಿದರು. ಅಲ್ಲದೆ ಈ ಪ್ರದರ್ಶನ ಸೋಮವಾರದಂದು ಸಹ ಮುಂದುವರೆಯುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಪ್ರೊ. ಪಿ. ಕೆ. ಚಾಪಗಾಂವ್ಕರ್, ಪ್ರೊ. ಶಶಿಕಾಂತ್ ಪಾಟೀಲ್, ಮುಖ್ಯಾಧ್ಯಾಪಕ ವಿನೋದ ಮರಾಠೆ, ಸಂಸ್ಥೆಯ ನಿರ್ದೇಶಕ ದಿಲೀಪ ಶಹಾಪುರಕರ, ಸದಾನಂದ ಕಪಿಲೇಶ್ವರಿ, ಹಾಗು ಗೋವಾ ಸೈನ್ಸ್ ಸೆಂಟರ್ನ ಭೂಷಣ ರಾವುತ್, ಗುಲ್ಬರ್ಗಾ ಸೈನ್ಸ್ ಸೆಂಟರ್ನ ಅಂಬರಾಯ ಬೆಲಮಗಿ ಹಾಗೂ ಲಕ್ಷ್ಮಿಕಾಂತ ಜಮಾದಾರ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಖಾನಾಪುರ ಸುತ್ತಮುತ್ತಲಿನ ಅನೇಕ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ವಿವಿಧ ವಿಜ್ಞಾನ ಪ್ರಯೋಗಗಳನ್ನು ನೇರವಾಗಿ ಅನುಭವಿಸುವ ಅವಕಾಶ ದೊರಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಉಲ್ಲಾಸದ ವಾತಾವರಣ ನಿರ್ಮಾಣವಾಯಿತು.
ಈ ಪ್ರದರ್ಶನ ಬಸ್ ನವೆಂಬರ್ 8 (ಶನಿವಾರ)ರಂದು ದಿನಪೂರ್ತಿ ವಿದ್ಯಾರ್ಥಿಗಳಿಗೆ ತೆರೆಯಲಾಗಿತ್ತು. ನವೆಂಬರ್ 10 (ಸೋಮವಾರ)ರಂದು ಮತ್ತೆ ದಿವಸಪೂರ್ಣ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಲಭ್ಯವಿರಲಿದೆ. ಸುತ್ತಮುತ್ತಲಿನ ಎಲ್ಲಾ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರದರ್ಶನಕ್ಕೆ ಭೇಟಿ ನೀಡಿ ವಿಜ್ಞಾನಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಚೇತನ ಮನೇರಿಕರ್ ಹಾಗೂ ಆಯೋಜಕರು ಕೋರಿದ್ದಾರೆ.


