घराची भिंत कोसळून मजदूर ठार. खानापूर तालुक्यातील रामापुर येथील दुर्दैवी घटना.
कक्केरी ; खानापूर तालुक्यातील रामापूर या ठिकाणी घराची भिंत कोसळल्याने एक मजदूर मरण पावला. सदर घटना आज सदर घटना आज गुरुवार दिनांक 9 ऑक्टोबर रोजी घडली आहे.
याबाबत सविस्तर माहिती अशी की, रामापुर गावातील फैयरोझखान, अयूबखान, देवडी यांच्या जुन्या घराचे छप्पर काढून भिंतीला पांढरं रंग देण्याचं काम सुरू असताना भींत कोसळली व दुर्दैवी अपघात घडला. भिंत कोसळल्याने विटांच्या ढिगाऱ्याखाली सापडून कामगार मोहम्मद हसीम दिलावरसाब देवडी (वय 60 वर्षे) हे गंभीर जखमी झाले. त्यांच्या डोक्याला जबर दुखापत झाल्याने त्यांना तातडीने कक्केरी येथील सरकारी रुग्णालयात दाखल करण्यात आलं. मात्र, उपचारादरम्यान त्यांचा मृत्यू झाला.
मृत मोहम्मद हसीम देवडी यांच्या मागे पत्नी, एक मुलगा आणि तीन मुली असा परिवार आहे. मोहम्मद हेच कुटुंबाचे प्रमुख व एकमेव कर्ते कमावते होते. त्यांच्या मृत्यूमुळे कुटुंब उघड्यावर आलं आहे.
या घटनेबाबत नंदगड पोलिस ठाण्यात गुन्हा नोंदविण्यात आला असून, पीआय. एस. सी. पाटील पुढील तपास करीत आहेत.
या दुर्दैवी घटनेनंतर अखिल कर्नाटक रयत संघ, बेंगळुरूचे राज्य उपाध्यक्ष किशोर मिठारी, तसेच किसान नेते अब्दुल अझीझ गिरियाल, अरीफ कुतुबुद्दीन पाटील, मुबारक इमामसाब कित्तूर, जाकीर मोहम्मद पाटील इत्यादींनी देवडी यांच्या घराला भेट देऊन कुटुंबीयांचे सांत्वन केले. त्यांनी सरकार, कामगार मंत्री आणि लोकप्रतिनिधींकडे या गरीब कुटुंबाला तातडीने आर्थिक मदत देण्याची मागणी केली आहे.
शेतकरी नेत्यांनी आश्वासन दिले की, सरकारकडे निवेदन सादर करून लवकरच या कुटुंबाला नुकसानभरपाई मिळवून दिली जाईल.
ಮನೆಗೋಡೆ ಕುಸಿದು ಕಾರ್ಮಿಕನ ದುರ್ಮರಣ – ಖಾನಾಪುರ ತಾಲ್ಲೂಕಿನ ರಾಮಾಪುರದಲ್ಲಿ ನಡೆದ ದುರಂತ ಘಟನೆ.
ಕಕ್ಕೇರಿ: ಖಾನಾಪುರ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಇಂದು (ಗುರುವಾರ, ಅಕ್ಟೋಬರ್ 9) ಬೆಳಿಗ್ಗೆ ಮನೆಗೋಡೆ ಕುಸಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ರಾಮಾಪುರ ಗ್ರಾಮದ ಫೈರೋಜಖಾನ್, ಅಯೂಬ್ಖಾನ್ ದೇವಡಿ ಇವರ ಹಳೆಯ ಮನೆಯ ಛಾವಣಿ ತೆರವುಗೊಳಿಸಿ ಗೋಡೆಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿತ್ತು. ಈ ವೇಳೆ ಗೋಡೆ ಕುಸಿದು ಕಾರ್ಮಿಕ ಮೊಹಮ್ಮದ್ ಹಸೀಂ ದಿಲಾವರಸಾಬ್ ದೇವಡಿ (ವಯಸ್ಸು 60) ಇವರ ಮೇಲೆ ಬಿದ್ದು, ಅವರು ಇಟ್ಟಿಗೆಯ ಅವಶೇಷಗಳಡಿ ಸಿಲುಕಿ. ತಲೆಗೆ ತೀವ್ರ ಗಾಯಗೊಂಡಿದ್ದರಿಂದ ಅವರನ್ನು ತಕ್ಷಣ ಕಕ್ಕೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು.
ಮೃತ ಮೊಹಮ್ಮದ್ ಹಸೀಂ ದೇವಡಿ ಇವರಿಗೆ ಪತ್ನಿ, ಒಬ್ಬ ಮಗ ಮತ್ತು ಮೂವರು ಹೆಣ್ಣುಮಕ್ಕಳಿದ್ದು, ಕುಟುಂಬದ ಏಕೈಕ ಆರ್ಥಿಕ ಆಧಾರವಾಗಿದ್ದರು. ಅವರ ಸಾವಿನಿಂದ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.
ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ಎಸ್.ಸಿ. ಪಾಟೀಲ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ದುರ್ಘಟನೆಯ ನಂತರ ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ್ ಮಿಠಾರಿ, ರೈತ ನಾಯಕರಾದ ಅಬ್ದುಲ್ ಅಜೀಝ್ ಗಿರಿಯಾಲ, ಅರಿಫ್ ಕುತ್ಬುದ್ದೀನ್ ಪಾಟೀಲ, ಮುಬಾರಕ್ ಇಮಾಮಸಾಬ್ ಕಿತ್ತೂರು, ಜಾಕೀರ್ ಮೊಹಮ್ಮದ್ ಪಾಟೀಲ ಇವರು ದೇವಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.
ರೈತ ನಾಯಕರು ಸರ್ಕಾರ, ಕಾರ್ಮಿಕ ಸಚಿವರು ಹಾಗೂ ಜನಪ್ರತಿನಿಧಿಗಳಿಂದ ಈ ಬಡ ಕುಟುಂಬಕ್ಕೆ ತಕ್ಷಣ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ಸರ್ಕಾರದ ಮೂಲಕ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.

