खानापूरच्या ‘त्रिमूर्ती आर्ट्स’च्या गणेश मूर्तींना वाढती मागणी; तिसऱ्या पिढीपर्यंत पोहोचलेले मूर्तीकाम
खानापूर : खानापूर शहरातील केदारी कुंभार, विजय कुंभार आणि त्यांचे निट्टूर येथील भाचे संदीप कुंभार यांनी मिळून ‘त्रिमूर्ती आर्ट्स’ या नावाने निट्टूर येथे गणेश मूर्ती बनविण्याची कार्यशाळा सुरू केली असून, गेल्या काही वर्षांपासून घरगुती लहान मूर्तींपासून ते सार्वजनिक मोठ्या मूर्तींपर्यंतचे काम मोठ्या प्रमाणावर सुरू आहे. त्यांच्या कलात्मक आणि आकर्षक मूर्तींना पाहून दिवसेंदिवस मागणी वाढत असून, खानापूरसह राज्याबाहेरही या मूर्तींची पसंती वाढत आहे.
अलीकडेच खानापूर सार्वजनिक गणेशोत्सव मंडळाचे अध्यक्ष पंडित ओगले व कार्यकर्त्यांनी निट्टूर येथील कार्यशाळेला भेट देऊन मूर्तिकारांशी संवाद साधला. यावेळी विजय हनमंत कुंभार यांनी “आपलं खानापूर” न्यूज पोर्टलला सांगितले की, हे मूर्तीकाम त्यांच्या कुटुंबात तीन पिढ्यांपासून सुरू आहे. सुरुवात त्यांच्या आजोबा केदारी कुंभार यांनी खानापूर लक्ष्मी मंदिरासमोरच्या स्वमालकीच्या घरात केली. त्यानंतर वडील हनमंत कुंभार यांनी परंपरा पुढे चालवली आणि आता विजय, त्यांचे भाऊ केदारी आणि भाचे संदीप मिळून हे कार्य सुरू ठेवत आहेत.
यंदा त्यांच्या कार्यशाळेतून 1250 हून अधिक लहान गणेश मूर्ती आणि 25 सार्वजनिक मोठ्या मूर्ती तयार केल्या जात आहेत. त्यांच्या मूर्तींसाठी गोवा, बाळेकुंद्री, सांबरा, बेळगाव, यल्लापूर तसेच महाराष्ट्रातूनही मागणी येत असल्याचे त्यांनी सांगितले.
पंडित ओगले यांनी कुंभार बंधूंच्या कार्याचे कौतुक करताना सांगितले की, मंडळाच्या वतीने नगरपंचायतीला शहरातील रस्त्यांवरील खड्डे बुजविण्याबाबत निवेदन देणार आहेत. तसेच गणेशोत्सवासाठी आवश्यक असणारी पोलीस, नगरपंचायत व हेस्कॉमची परवानगी मिळवण्यासाठी ‘वन विंडो सिस्टीम’ राबविण्याचा प्रयत्न करणार असल्याचेही त्यांनी नमूद केले. यावर्षी गणेशोत्सव पर्यावरणपूरक आणि पारंपरिक पद्धतीने साजरा करण्यावर भर दिला जाणार असल्याचे त्यांनी सांगितले.
ಖಾನಾಪುರದ ‘ತ್ರಿಮೂರ್ತಿ ಆರ್ಟ್ಸ್’ ಅವರು ತಯಾರಿಸಿದ ಗಣೇಶ ಮೂರ್ತಿಗಳಿಗೆ ಹೆಚ್ಚುತ್ತಿರುವ ಬೇಡಿಕೆ; ಮೂರನೇ ತಲೆಮಾರಿಗೆ ತಲುಪಿದ ಮೂರ್ತಿಕಲಾ ಪರಂಪರೆ
ಖಾನಾಪುರ : ಖಾನಾಪುರ ನಗರದ ಕೇದಾರಿ ಕುಂಭಾರ, ವಿಜಯ ಕುಂಭಾರ ಹಾಗೂ ನಿಟ್ಟೂರು ಗ್ರಾಮದ ಅವರ ಸೋದರಳಿಯ ಸಂದೀಪ್ ಕುಂಭಾರ ಈ ಮೂವರು ಸೇರಿ ‘ತ್ರಿಮೂರ್ತಿ ಆರ್ಟ್ಸ್’ ಎಂಬ ಹೆಸರಿನ ಗಣೇಶ ಮೂರ್ತಿಗಳ ತಯಾರಿಕಾ ಕಾರ್ಯಾಗಾರವನ್ನು ನಿಟ್ಟೂರ ಊರಿನಲ್ಲಿ ಆರಂಭಿಸಿದ್ದು, ಕಳೆದ ಕೆಲವು ವರ್ಷಗಳಿಂದ ಮನೆಯಲ್ಲಿ ಪೂಜಿಸುವ ಸಣ್ಣ ಮೂರ್ತಿಗಳಿಂದ ಹಿಡಿದು ಸಾರ್ವಜನಿಕ ಉತ್ಸವಗಳಿಗಾಗಿ ದೊಡ್ಡ ಮೂರ್ತಿಗಳವರೆಗೆ ಭಾರೀ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ಇವರ ಕಲಾತ್ಮಕ ಮತ್ತು ಆಕರ್ಷಕ ಮೂರ್ತಿಗಳನ್ನು ನೋಡಿ ದಿನದಿಂದ ದಿನಕ್ಕೆ ಗಣೇಶ್ ಮೂರ್ತಿಗಳ ಬೇಡಿಕೆ ಹೆಚ್ಚುತ್ತಿದ್ದು, ಖಾನಾಪುರದೊಂದಿಗೆ ರಾಜ್ಯದ ಹೊರಗೂ ಜನಪ್ರಿಯತೆ ಪಡೆಯುತ್ತಿದೆ.
ಇತ್ತೀಚೆಗೆ ಖಾನಾಪುರ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ ಪಂಡಿತ ಒಗಲೆ ಹಾಗೂ ಕಾರ್ಯಕರ್ತರು ನಿಟ್ಟೂರ ಊರಿನ ಕಾರ್ಯಾಶಾಲೆಗೆ ಭೇಟಿ ನೀಡಿ ಮೂರ್ತಿಕಾರರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಿಜಯ ಹನುಮಂತ ಕುಂಭಾರ ಅವರು “ಅಪಲ ಖಾನಾಪುರ” ಸುದ್ದಿ ಪೋರ್ಟಲ್ಗೆ ನೀಡಿದ ಮಾಹಿತಿಯಲ್ಲಿ, ಈ ಮೂರ್ತಿಕಲಾ ಪರಂಪರೆ ತಮ್ಮ ಕುಟುಂಬದಲ್ಲಿ ಮೂರನೇ ತಲೆಮಾರಿಗೆ ತಲುಪಿದೆ ಎಂದರು. ಪ್ರಾರಂಭದಲ್ಲಿ ಅವರ ತಾತ ಕೆದಾರಿ ಕುಂಭಾರ ಅವರು ಖಾನಾಪುರ ಲಕ್ಷ್ಮೀ ದೇವಾಲಯದ ಎದುರಿನ ತಮ್ಮ ಸ್ವಂತ ಮನೆಯಲ್ಲಿ ವಿಗ್ರಹಗಳನ್ನು ತಯಾರಿಸುತ್ತಿದ್ದರು. ನಂತರ ತಂದೆ ಹನುಮಂತ ಕುಂಭಾರ ಅವರು ಈ ಪರಂಪರೆಯನ್ನು ಮುಂದುವರೆಸಿದರು. ಇದೀಗ ವಿಜಯ, ಅವರ ಸಹೋದರ ಕೆದಾರಿ ಹಾಗೂ ಸೋದರಳಿಯ ಸಂದೀಪ್ ಸೇರಿ ಈ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಈ ವರ್ಷ ಅವರ ಕಾರ್ಯಾಗಾರದಲ್ಲಿ 1250 ಕ್ಕೂ ಹೆಚ್ಚು ಸಣ್ಣ ಗಣೇಶ ಮೂರ್ತಿಗಳು ಹಾಗೂ 25 ಸಾರ್ವಜನಿಕ ದೊಡ್ಡ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಇವರ ಮೂರ್ತಿಗಳಿಗೆ ಗೋವಾ, ಬಾಲೇಕುಂದ್ರಿ, ಸಾಂಬ್ರಾ, ಬೆಳಗಾವಿ, ಯಲ್ಲಾಪುರ ಸೇರಿದಂತೆ ಮಹಾರಾಷ್ಟ್ರದಿಂದಲೂ ಬೇಡಿಕೆ ಇದೆ ಎಂದು ಅವರು ತಿಳಿಸಿದರು.
ಪಂಡಿತ ಒಗಲೆ ಅವರು ಕುಂಭಾರ ಬಂಧುಗಳ ಕೆಲಸವನ್ನು ಶ್ಲಾಘಿಸುತ್ತಾ, ಮಂಡಳಿಯ ಪರವಾಗಿ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕುರಿತು ನಗರ ಪಂಚಾಯಿತಿಗೆ ಮನವಿ ಸಲ್ಲಿಸಲಾಗುವುದು ಎಂದರು. ಜೊತೆಗೆ ಗಣೇಶೋತ್ಸವಕ್ಕಾಗಿ ಅಗತ್ಯವಿರುವ ಪೊಲೀಸ್, ನಗರ ಪಂಚಾಯಿತಿ ಹಾಗೂ ಹೆಸ್ಕಾಂ ಪರವಾನಗಿಯನ್ನು ಪಡೆಯಲು ‘ಒನ್ ವಿಂಡೋ ಸಿಸ್ಟಮ್’ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದರು. ಈ ವರ್ಷ ಗಣೇಶೋತ್ಸವವನ್ನು ಪರಿಸರ ಸ್ನೇಹಿ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದೂ ಅವರು ಹೇಳಿದರು.

