शिवाजीनगर येथील शिशुपोषण केंद्रात श्रीकृष्ण जन्माष्टमी उत्सव मोठ्या उत्साहात साजरी-
खानापूर : जिल्हा परिषद बेलगाव, तालुका पंचायत, महिला व बाल विकास विभाग बेलगाव, बाल विकास विभाग खानापूर व मलप्रभा स्त्री शक्ती स्वयंसहायता संघांच्या ब्लॉक सोसायटीच्या आश्रयाखाली चालविण्यात येणाऱ्या शिवाजीनगर येथील शिशुपोषण केंद्रात श्रीकृष्ण जन्माष्टमी उत्सव मोठ्या उत्साहात साजरा करण्यात आला.

या अंगणवाडी केंद्रातील बालकांसाठी विविध सांस्कृतिक कार्यक्रमांचे आयोजन करण्यात आले. कार्यक्रमाचे विशेष आकर्षण म्हणजे लहान मुलांनी श्रीकृष्ण, राधा, गोपी, बलराम आदींची वेशभूषा धारण करून सहभाग नोंदवला. रंगीबेरंगी पारंपरिक वेशभूषा, मोरपंखी मुकुट, बासरी, दहीहंडीची प्रतिकृती यामुळे परिसर भक्तिमय वातावरणाने भारून गेला.

अनेक पालकांनीही मुलांसोबत या कार्यक्रमात उत्साहाने भाग घेतला. या कार्यक्रमाचा उद्देश लहान मुलांमध्ये भारतीय संस्कृती, परंपरा व सणांविषयी जागृती निर्माण करणे आणि त्यांच्या व्यक्तिमत्व विकासाला चालना देणे असा असल्याचे आयोजकांनी सांगितले.
बालविकास अंगणवाडी सेविका गिरीजा कुकडळी, मलप्रभा स्त्री शक्ती संघाच्या अध्यक्षा पूजा पाटील यांनी मुलांना वेशभूषा, नृत्य, गाणी आणि खेळांच्या माध्यमातून जन्माष्टमीचे महत्त्व सांगितले. शेवटी सहभागी सर्व बालकांना स्मृतिचिन्ह, बक्षिसे आणि अल्पोपहार वाटप करण्यात आले.
उपस्थित पालक, ग्रामस्थ आणि अधिकारी यांनी या उपक्रमाचे कौतुक करताना अशा सांस्कृतिक व शैक्षणिक कार्यक्रमांमुळे मुलांचा सर्वांगीण विकास साधता येतो, असे मत व्यक्त केले.
ಶಿವಾಜಿನಗರದ ಶಿಶು ಪೋಷಣ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಖಾನಾಪುರ : ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ತಾಲ್ಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಇಲಾಖೆ ಖಾನಾಪುರ, ಮಲಪ್ರಭಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಬ್ಲಾಕ್ ಸೊಸೈಟಿ ಆಶ್ರಯದಲ್ಲಿ ನಡೆಸುತ್ತಿರುವ ಶಿಶುಪಾನಾ ಕೇಂದ್ರ ಶಿವಾಜಿನಗರ ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಯಿತು.
ಈ ಅಂಗನವಾಡಿ ಕೇಂದ್ರಗಳ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪುಟ್ಟ ಮಕ್ಕಳು ಶ್ರೀಕೃಷ್ಣ, ರಾಧಾ, ಗೋಪಿ, ಬಲರಾಮ ಮೊದಲಾದವರ ವೇಷಭೂಷಣ ತೊಟ್ಟು ಪಾಲ್ಗೊಂಡರು. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಪು, ನವಿಲುಗರಿ ಮುಕುಟಗಳು, ಬಾಸುರಿ, ದಹಿಹಂಡಿಯ ಪ್ರತಿಕೃತಿ ಇತ್ಯಾದಿಗಳಿಂದ ಸುತ್ತಮುತ್ತ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು.
ಅನೇಕ ಪೋಷಕರು ಸಹ ಮಕ್ಕಳ ಜೊತೆ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಈ ಕಾರ್ಯಕ್ರಮದ ಉದ್ದೇಶ ಪುಟ್ಟ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಹಬ್ಬಗಳ ಕುರಿತು ಜಾಗೃತಿ ಮೂಡಿಸುವುದು, ಜೊತೆಗೆ ಅವರ ವ್ಯಕ್ತಿತ್ವ ವಿಕಾಸಕ್ಕೆ ಉತ್ತೇಜನ ನೀಡುವುದು ಎಂದು ಆಯೋಜಕರು ತಿಳಿಸಿದರು.
ಬಾಲವಿಕಾಸ ಅಂಗನವಾಡಿ ಸೇವಿಕೆ ಗಿರಿಜಾ ಕುಕಡಳ್ಳಿ, ಮಲಪ್ರಭಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಪೂಜಾ ಪಾಟೀಲ್ ಮಕ್ಕಳಿಗೆ ವೇಷಭೂಷೆ, ನೃತ್ಯ, ಹಾಡು ಹಾಗೂ ಇತರ ಆಟಗಳ ಮೂಲಕ ಜನ್ಮಾಷ್ಟಮಿಯ ಮಹತ್ವ ತಿಳಿಸಿದರು. ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ, ಬಹುಮಾನ ಹಾಗೂ ಉಪಹಾರ ವಿತರಿಸಲಾಯಿತು.
ಉಪಸ್ಥಿತ ಪೋಷಕರು, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಈ ಉಪಕ್ರಮವನ್ನು ಮೆಚ್ಚಿ, ಇಂತಹ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

