
बदली झालेल्या शिक्षकाच्या जागी, नवीन शिक्षक किंवा अतिथी शिक्षकाची नेमणूक झाल्याशिवाय, बदली शिक्षकाला सोडू नयेत.
बेळगाव : बदली करुन घेतलेल्या शिक्षकांच्या जागी नवीन शिक्षक किंवा अतिथी शिक्षकांची नेमणूक केल्याशिवाय शिक्षकांना बदली झालेल्या ठिकाणी सोडू नये तसेच खानापूर तालुक्यातील मराठी शाळांचा पदभार मराठी विषयांच्या शिक्षकांकडे देण्यात यावा अशी मागणी खानापूर तालुका महाराष्ट्र एकीकरण समितीच्यावतीने जिल्हा शिक्षणाधिकारी मोहनकुमार हंचाटे यांच्या कडे करण्यात आली आहे.
खानापूर तालुका समितीचे अध्यक्ष गोपाळ देसाई, सर चिटणीस आबासाहेब दळवी, गोपाळ पाटील, निरंजन सरदेसाई, अमृत शेलार, गणपती पाटील, यांनी गुरुवारी जिल्हा शिक्षणाधिकारी हंचाटे यांची भेट घेऊन विविध विषयांवर चर्चा केली.
खानापूर तालुक्यामध्ये शिक्षकांच्या जागा मोठ्या प्रमाणात रिक्त आहेत. तसेच अनेक शाळांचा भार अतिथी शिक्षकांवर आहे. त्यामुळे अनेक शाळाना अडचणीचा सामना करावा लागत असून गेल्या काही दिवसांपासून शिक्षण खात्याने शिक्षकांच्या बदलीसाठी कौन्सिलिंग घेतले आहे. त्यामुळे तालुक्याच्या पश्चिम भागासह अनेक भागातील शिक्षकांनी दुसऱ्या ठिकाणी बदली करून घेतली आहे. त्यामुळे पुन्हा एकदा शाळासमोर मोठे संकट निर्माण होणार आहे. त्यामुळे ज्या शाळांमधील शिक्षकांनी बदली करून घेतली आहे. त्या शाळेत नवीन शिक्षकाची नेमणूक करावी किंवा त्या ठिकाणी लवकर अतिथी शिक्षकाची नेमणूक करावी आणि त्यानंतरच शिक्षकांना दुसऱ्या शाळेत जाण्याची परवानगी द्यावी अशी मागणी करण्यात आली. तसेच अनेक मराठी शाळांमध्ये कन्नड शिक्षकांवर मुख्याध्यापक पदाचा कारभार सोपवण्यात आला आहे. अशा ठिकाणी पुन्हा मराठी शिक्षकांवर शाळेची धुरा देण्यात यावी. यासह पावसामुळे अनेक शाळांमध्ये पाणी गळती होत आहे त्यामुळे विद्यार्थ्यांना अडचण होत आहे. त्यामुळे शिक्षण खात्याने पाणी गळती होत असलेल्या शाळांची माहिती घेऊन विद्यार्थ्यांना त्रास होणार नाही याची दखल घ्यावी अशी मागणी समितीतर्फे करण्यात आली. यावेळी जिल्हा शिक्षणाधिकारी हंचाटे यांनी विद्यार्थ्यांचे शैक्षणिक नुकसान होणार नाही याकडे लक्ष दिले जाईल असे आश्वासन दिले आहे.
ವರ್ಗಾವಣೆಗೊಂಡ ಶಿಕ್ಷಕರ ಜಾಗಕ್ಕೆ ಬದಲಿ ಹೊಸ ಶಿಕ್ಷಕರನ್ನು ಅಥವಾ ಅತಿಥಿ ಶಿಕ್ಷಕರನ್ನು ನೇಮಿಸುವರೆಗೆ ಶಿಕ್ಷಕರನ್ನು ಬಿಡುಗಡೆ ಮಾಡಬಾರದು.
ಬೆಳಗಾವಿ: ವರ್ಗಾವಣೆಗೊಂಡ ಶಿಕ್ಷಕರ ಜಾಗಕ್ಕೆ ಹೊಸ ಶಿಕ್ಷಕರನ್ನು ಅಥವಾ ಅತಿಥಿ ಶಿಕ್ಷಕರನ್ನು ನೇಮಿಸದ ಹೊರತು ಶಿಕ್ಷಕರನ್ನು ವರ್ಗಾವಣೆಗೊಂಡ ಸ್ಥಳದಿಂದ ಬಿಡಬಾರದು ಎಂದು ಖಾನಾಪುರ ತಾಲೂಕಾ ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿ ಮೋಹನಕುಮಾರ ಹಂಚಾಟೆ ಅವರಿಗೆ ಮನವಿ ಮೂಲಕ ಆಗ್ರಹಿಸಿ ಮರಾಠಿ ಉಸ್ತುವಾರಿ ಖಾನಾಪುರ ತಾಲೂಕಿನ ಶಾಲೆಗಳನ್ನು ಮರಾಠಿ ವಿಷಯಗಳ ಶಿಕ್ಷಕರಿಗೆ ಕಾರ್ಯಾ ನಿರ್ವಹಿಸಲು ಅಧೀಕಾರ ನೀಡಬೇಕು.
ಖಾನಾಪುರ ತಾಲೂಕಾ ಸಮಿತಿ ಅಧ್ಯಕ್ಷ ಗೋಪಾಲ ದೇಸಾಯಿ, ಸರ್ ಚಿಟ್ನೀಸ್ ಅಬಾಸಾಹೇಬ ದಳವಿ, ಗೋಪಾಲ ಪಾಟೀಲ, ನಿರಂಜನ ಸರ್ದೇಸಾಯಿ, ಅರವಿಂದ ಶೇಲಾರ್, ಗಣಪತಿ ಪಾಟೀಲ ಅವರು ಗುರುವಾರ ಜಿಲ್ಲಾ ಶಿಕ್ಷಣಾಧಿಕಾರಿ ಹಂಚಾಟೆ ಅವರನ್ನು ಭೇಟಿ ಮಾಡಿ ನಾನಾ ಸಮಸ್ಯೆಗಳ ಕುರಿತು ಚರ್ಚಿಸಿದರು.
ಖಾನಾಪುರ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅಲ್ಲದೆ ಹಲವು ಶಾಲೆಗಳಿಗೆ ಅತಿಥಿ ಶಿಕ್ಷಕರೇ ನಿಯೋಜನೆ ಮಾಡಲಾಗಿ ಅವರ ಮೇಲೆ ಅಧೀಕಾರದ ಹೊರೆ ನೀಡಲಾಗಿದೆ. ಇದರಿಂದ ಹಲವು ಶಾಲೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ ಕೆಲ ದಿನಗಳಿಂದ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ನಡೆಸಿದೆ. ಇದರಿಂದ ತಾಲೂಕಿನ ಪಶ್ಚಿಮ ಭಾಗ ಸೇರಿದಂತೆ ಹಲವು ಭಾಗದ ಶಿಕ್ಷಕರು ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ ಆದರೆ ಅವರ ಜಾಗಕ್ಕೆ ಬೇರೆ ಯಾರನ್ನೂ ನಿಯ್ಯಜನೆ ಮಾಡಿಲ್ಲ. ಇದರಿಂದ ಶಾಲೆಯ ಮುಂದೆ ಮತ್ತೊಮ್ಮೆ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಹೀಗಾಗಿ ಶಾಲೆಗಳಲ್ಲಿ ವರ್ಗಾವಣೆ ಆದ ಸ್ಥಳಕ್ಕೆ ಬೇರೆ ಶಿಕ್ಷಕರನ್ನು ನೇಮಿಸಬೇಕು ಅಥವಾ ಆ ಸ್ಥಳಕ್ಕೆ ಅತಿಥಿ ಶಿಕ್ಷಕರನ್ನು ಶೀಘ್ರವಾಗಿ ನೇಮಿಸಿ ನಂತರವೇ ಶಿಕ್ಷಕರಿಗೆ ಬೇರೆ ಶಾಲೆಗೆ ತೆರಳಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಅಲ್ಲದೆ ಹಲವು ಮರಾಠಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪ್ರಾಂಶುಪಾಲರ ಹುದ್ದೆಯನ್ನು ವಹಿಸಲಾಗಿದೆ. ಇಂತಹ ಜಾಗದಲ್ಲಿ ಮರಾಠಿ ಶಿಕ್ಷಕರಿಗೆ ಮತ್ತೆ ಶಾಲೆಯ ಜವಾಬ್ದಾರಿ ನೀಡಬೇಕು. ಹಾಗೆಯೇ ಮಳೆಯಿಂದಾಗಿ ಹಲವು ಶಾಲೆಗಳಲ್ಲಿ ನೀರು ಸೋರುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ನೀರು ಸೋರುತ್ತಿರುವ ಶಾಲೆಗಳ ಮಾಹಿತಿ ಪಡೆದು ಸರಿ ಪಡಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಶಿಕ್ಷಣಾಧಿಕಾರಿ ಹಂಚಾಟೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶೈಕ್ಷಣಿಕ ನಷ್ಟವಾಗದಂತೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.
